ಯಲ್ಲಾಪುರ: ತಾಲೂಕಿನ ಹಿತ್ಲಳ್ಳಿಯ ಸ್ವರಾ ಲಹರಿ ಫೌಂಡೇಶನ್ ಆಶ್ರಯದಲ್ಲಿ ಡಿ.12 ರಂದು ಸಂಜೆ 6 ಗಂಟೆಗೆ ಹಿತ್ಲಳ್ಳಿ ಸಹಕಾರಿ ಸಂಘದ ಸಭಾಭವನದಲ್ಲಿ ಸಂಗೀತ ರಸಸಂಜೆ ಆಯೋಜಿಸಲಾಗಿದೆ.
ಪಂಡಿತ್ ಪ್ರವೀಣ್ ಗೋಡ್ಕಿಂಡಿ ಅವರ ಬಾನ್ಸುರಿ ವಾದನಕ್ಕೆ ಕಿರಣ್ ಗೋಡ್ಕಿಂಡಿ ತಬಲಾ ಸಾಥ್ ನೀಡಲಿದ್ದಾರೆ. ಪಂಡಿತ್ ಧನಂಜಯ್ ದೈತಂಕರ್ ಅವರ ಸಂತೂರ್ ವಾದನಕ್ಕೆ ಸಂತೋಷ್ ಹೆಗಡೆ ತಬಲಾ ಸಾಥ್ ಒದಗಿಸಲಿದ್ದಾರೆ.
ಹಿತ್ಲಳ್ಳಿಯಲ್ಲಿ ಸಂಗೀತ ರಸಸಂಜೆ: ಗೋಡ್ಕಿಂಡಿ ಬಾನ್ಸುರಿ ವಾದನ
![](https://euttarakannada.in/wp-content/uploads/2024/12/IMG-20241207-WA0131-730x438.jpg)